ಕಾಂಗ್ರೆಸ್ ಹೈಕಮಾಂಡ್ ಪ್ರಭಾವಿ ಮುಖಂಡ ದಿವಂಗತ ಅಹಮದ್ ಪಟೇಲ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಹೈಕಮಾಂಡ್ ಪ್ರತಿನಿಧಿಗಳು ಯಾರಾದರೂ ಬರುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾಲಾಳುಗಳಾಗಿ ಸೇವೆ ಮಾಡಲು ಮುಂದೆ ನಿಂತಿರುತ್ತಿದ್ದ ಕಾಲ ಅದು. ಅಹಮದ್ ಪಟೇಲ್ ಏಟ್ರಿಯಾ ಹೋಟೆಲ್ ನಲ್ಲಿ ಉಳಿದಿದ್ದರು. ಆಗ ಏಟ್ರಿಯಾ ಹೋಟೆಲ್ ಹೊರಗಿನಿಂದ ಬರುವ ರಾಜಕಾರಣಿಗಳಿಗೆ ತವರುಮನೆ ರೀತಿ ಇತ್ತು.
ಪಕ್ಷದ ಮುಖಂಡರ ಭೇಟಿ ಮುಗಿಸಿದ ಅವರು ಸಂಜೆ ಹೋಟೆಲ್ ಗೆ ತೆರಳಿ ವಿರಮಿಸುತ್ತಿದ್ದರು. ರೂಮಿಗೆ ಪಿ. ಲಂಕೇಶ್ ಅವರಿಂದ ಪ್ರಭಾವಿತರಾಗಿದ್ದ ರಾಜಕಾರಣಿಯೊಬ್ಬರು ಬಂದರು. ಜೊತೆಗೊಬ್ಬ ಪತ್ರಕರ್ತನನ್ನು ಕರೆತಂದಿದ್ದರು. ಪತ್ರಕರ್ತ ಬಂದಿದ್ದು ಅಹಮದ್ ಪಟೇಲ್ ಬೆಂಗಳೂರಿನ ಭೇಟಿಯ Exclusive ಸುದ್ದಿಗಾಗಿ. ಈ ಪತ್ರಕರ್ತರನ್ನು ಅಹಮದ್ ಪಟೇಲ್ ಗೆ ಪರಿಚಯಿಸುತ್ತಾ ‘Sir He is very good planter’ ಎಂದಿದ್ದಾರೆ.
ತಕ್ಷಣವೇ ಪ್ರತ್ರಿಕ್ರಿಯಿಸಿದ ಅಹಮದ್ ಪಟೇಲ್ ‘Nice, How is your plant? Where is it? Is it near to Benglore? ಅಂತಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಆಗ ಮಧ್ಯ ಬಾಯಿ ಹಾಕಿದ ಆ ರಾಜಕಾರಣಿ, Sir, he is story planter, he will plant the story in all news papers. He is master in planting ಎಂದರಂತೆ. ಅಹಮದ್ ಪಟೇಲ್ ಬಿದ್ದು ಬಿದ್ದು ನಕ್ಕರಂತೆ!
ಆಮೇಲೆ ಅಹಮದ್ ಪಟೇಲ್ ಏನು ಹೇಳಿದರು ಮತ್ತು ಆ ಪತ್ರಕರ್ತ ಏನು ವರದಿ ಮಾಡಿದರು ಎನ್ನುವುದು ಬೇರೆ ವಿಷಯ. ಆದರೆ ಆ ಕಾಲದಿಂದಲೂ ಇಂಥ ಪ್ಲಾಂಟಿಂಗ್ ಪದ್ಧತಿ ಇತ್ತು ಎನ್ನುವುದು ಮಾತ್ರ ಅಸಲಿಯತ್ತು. ಈಗ ಬಿಡಿ ಪ್ಲಾಂಟಿಂಗ್ ಮಾಡುವುದರಲ್ಲಿ ಪಂಟರ್ ಗಳು ತುಂಬಿ ತುಳುಕುತ್ತಿದ್ದಾರೆ. ಟಿವಿ ಲೋಕದಲ್ಲಂತೂ ಸುದ್ದಿಗಳು ಗಂಟೆಗೊಮ್ಮೆ ಹುಟ್ಟುತ್ತವೆ, ಗಂಟೆಗೊಮ್ಮೆ ಸಾಯುತ್ತವೆ.

0 Comments