ಈ ವರ್ಷ ನಿವೃತ್ತರಾಗಲಿರುವ IAS, IPS ಅಧಿಕಾರಿಗಳು!

Dharaneesh Bookanakere |

Feb 27, 2025 | Officers Diary

Dharaneesh Bookanakere

Feb 27, 2025 | Officers Diary

ಈ ವರ್ಷ ಐಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ ಮಾರ್ಚ್ 31 ರಂದು, ಎಸ್.ಆರ್. ಉಮಾಶಂಕರ್ ಏಪ್ರಿಲ್ 30 ರಂದು, ಎನ್. ಜಯರಾಂ ಮೇ 31ರಂದು, ಅತಿಲ್‌ಕುಮಾರ್ ತಿವಾರಿ, ಜಿ. ಸತ್ಯವತಿ, ಅಜಯ್ ಸೇರ್ ಜೂನ್ 30 ರಂದು ಹಾಗೂ ನಿಲಯ ಮಿತಾಶ್ ಡಿಸಂಬರ್ 31 ರಂದು ನಿವೃತ್ತಿಯಾಗಲಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರದ ಸಹಾಯಕ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್.ಕೆ. ಅತಿಕ್ ಜನವರಿ 31ರಂದು ನಿವೃತ್ತಿಯಾಗಿದ್ದರು. ಅವರನ್ನು ರಾಜ್ಯ ಸರ್ಕಾರ ಮರು ನೇಮಕ ಮಾಡಿ ಸೇವೆಯಲ್ಲಿ ಮುಂದುವರೆಸಿದೆ.

ಇಬ್ಬರು ಐಪಿಎಸ್ ಗಳೂ ನಿವೃತ್ತಿ

ಈ ವರ್ಷ ಐಪಿಎಸ್ ಅಧಿಕಾರಿಗಳಾದ ಮಾಲಿನಿ ಕೃಷ್ಣಮೂರ್ತಿ ಜುಲೈ 31 ರಂದು ನಿವೃತ್ತಿಯಾಗಲಿದ್ದಾರೆ. DGಯಾಗಿರುವ ಮಾಲಿನಿ ಕೃಷ್ಣಮೂರ್ತಿ ಅವರು ನಿವೃತ್ತರಾಗುವುದರಿಂದ ಅವರ ಸ್ಥಾನಕ್ಕೆ ಸದ್ಯ ಬೆಂಗಳೂರು ಪೊಲೀಸ್ ಆಯುಕ್ತರಾಗಿರುವ ಬಿ ದಯಾನಂದ್ ಬರಬಹುದು. ಹಿಂದೆ ಕಮಲ್ ಪಂತ್ DG ಆಗಿ ಭಡ್ತಿ ಪಡೆದ ನಂತರವೂ ADGP ಪೋಸ್ಟ್ ಆದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲೇ ಮುಂದುವರೆದಿದ್ದರು. ಅದೇ ರೀತಿ ಬಿ ದಯಾನಂದ್ ಅವರು DG ಆದ ಮೇಲೂ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲಿ ಮುಂದುವರೆಯಲೂಬಹುದು. ಅಥವಾ ಹೊಸ ಜಾಗಕ್ಕೆ ಹೋಗಬಹುದು. ಇದಲ್ಲದೆ ಇನ್ನೊಬ್ಬ ಹಿರಿಯ ಐಪಿಎಸ್ ಅಧಿಕಾರಿ DIGP ಬಿ.ಎಸ್. ಲೋಕೇಶ್ ಕುಮಾರ್ ಏಪ್ರಿಲ್ 30ರಂದು ನಿವೃತ್ತಿಯಾಗಲಿದ್ದಾರೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಕುಸಿಯುತ್ತಿರುವ ಕಾರ್ಯಾಂಗದ ಕ್ಷಮತೆ

ಕುಸಿಯುತ್ತಿರುವ ಕಾರ್ಯಾಂಗದ ಕ್ಷಮತೆ

ರಾಜ್ಯ ಸರ್ಕಾರ ಟೆಕ್ ಆಫ್ ಆಗಿಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ ಎನ್ನುವ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಕಾರ್ಯಾಂಗಕ್ಕೆ ಸಂಬಂಧಿಸಿದ ಇಂಥ ದೂರುಗಳಿಗೆ ಉತ್ತರ ಅಥವಾ ಸ್ಪಷ್ಟೀಕರಣ ಕೊಡಬೇಕಾದುದು ಶಾಸಕಾಂಗದ ಅದರಲ್ಲೂ ಆಡಳಿತಾರೂಢ ಪಕ್ಷದ ಕರ್ತವ್ಯ.

read more
ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಲಾಬಿ ಶುರು

ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಲಾಬಿ ಶುರು

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ಮಹಾನಗರದ ಪೊಲೀಸ್ ಕಮಿಷನರ್ ಆಗಲು DG & IGP ಹುದ್ದೆಗಿಂತಲೂ ಹೆಚ್ಚು ಪೈಪೋಟಿ ಮತ್ತು ಲಾಭಿ ನಡೆಯುತ್ತದೆ. ಬಿ ದಯಾನಂದ್ ಅವರನ್ನು 2023ರ ಮೇ 31ರಂದು ಹಾಲಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿತ್ತು.

read more
Instagram
Instagram